Health is Wealth : ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.ನಾವು ಯಾವುದೇ ರೀತಿಯ ಆಹಾರ ತೆಗೆದುಕೊಳ್ಳುವ ಮುನ್ನ ಆರೋಗ್ಯದ ಮೇಲೆ ಗಮನವಿರಬೇಕು. ಉತ್ತಮ ಆರೋಗ್ಯವು ನಮಗೆ ಮಾನಸಿಕ,ದೈಹಿಕ,ಸಾಮಾಜಿಕ ಮತ್ತು ಬೌದ್ಧಿಕ ಎಲ್ಲಾ ಅಂಶಗಳಲ್ಲಿ ಒಳಿತು ಉಂಟುಮಾಡುತ್ತದೆ.ಉತ್ತಮ ಆರೋಗ್ಯವು ನಮಗೆ ಅನಾರೋಗ್ಯ ಮತ್ತು ರೋಗಗಳಿಂದ ಮುಕ್ತಿ ನೀಡುತ್ತದೆ.ಒಳ್ಳೆಯ ಆರೋಗ್ಯಎಂದರೆ ಮಾನಸಿಕ,ದೈಹಿಕ ಮತ್ತು ಸಾಮಾಜಿಕ ಆರೋಗ್ಯದ ಪರಿಕಲ್ಪನೆಯಾಗಿದೆ.ಮಹಾತ್ಮ ಗಾಂಧಿಯವರ ಪ್ರಕಾರ,”ನಿಜವಾದ ಸಂಪತ್ತು ಆರೋಗ್ಯ,ಚಿನ್ನ ಮತ್ತು ಬೆಳ್ಳಿಯ ತುಂಡುಗಳಲ್ಲ”.ಒಮ್ಮೆ ನಾವೆಲ್ಲರೂ ಇದರ ಬಗ್ಗೆ ಯೋಚಿಸಿದರೆ ನಿಜ ಎನ್ನಿಸುತ್ತದೆ ಅಲ್ಲವೇ..?
Bigg Boss 10 Kannada 2023: Contestant list: Release Date
ಈಗಿನ ಸ್ಮಾರ್ಟ್ ಕಾಲದಲ್ಲಿ ನಾವೆಲ್ಲ ಹಣ ಸಂಪಾದನೆಗಾಗಿ ಓಡುತ್ತಾ ನಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುತ್ತಿದ್ದೆವೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಹಾಕಲು, ಕೇವಲ ಕೆಲವು ದೈನಂದಿನ ಅಭ್ಯಾಸಗಳನ್ನು ಬದಲಿಸಿಕೊಂಡರೆ ಸಾಕು. ಉತ್ತಮ ಆರೋಗ್ಯವನ್ನು ನಿರ್ಮಿಸಿಕೊಳ್ಳಲ್ಲು ನೈಸರ್ಗಿಕ ಬೆಳಕು, ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಪರಿಸರ, ಸಮತೋಲಿತ ಆಹಾರ, ದೈನಂದಿನ ವ್ಯಾಯಾಮ, ಉತ್ತಮ ಕೆಲಸ, ಶಾಂತಿಯುತ ಕುಟುಂಬ ಪರಿಸರ ಇವೆಲ್ಲವೂ ಸಹಾಯ ಮಾಡುತ್ತವೆ.
ಆರೋಗ್ಯ – ಆಹಾರ:
ನಾವು ಸೇವಿಸುವ ಆಹಾರವು’ಇಂಧನ’ದಂತೆ ಕಾರ್ಯನಿರ್ವಹಿಸುತ್ತದೆ,ದೇಹವು ಸರಿಯಾಗಿ ಕಾರ್ಯನಿರ್ವಹಿಸಲು
ನಮ್ಮೆಲ್ಲರಿಗೂ ತಿಳಿದಿರುವ ಹಾಗೂ ಅನೇಕ ಬಾರಿ ಕೇಳಿದ ವಿಷಯವೆ ಇದು-ನಿಯಮಿತವಾದ ವ್ಯಾಯಾಮವು ಆರೋಗ್ಯಕ್ಕೆ
ಒಳ್ಳೆಯದು,ಮತ್ತು ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಆದರೆ ಈಗಿನ ಐಟಿ,ಸಾಫ್ಟವೇರ್
ಉದ್ಯೋಗಿಗಳಿಗೆ ಕುಳಿತು ಮಾಡುವ ಕೆಲಸಗಳಾಗುರುವುದರಿಂದ,ಇಂತಹವರಿಗರ ವ್ಯಾಯಮ-ಯೋಗ ಇವುಗಳನ್ನು
ಅಳವಡಿಸಿಕೊಳ್ಳುವುದು ಅನಿವಾರ್ನಿಯ.ಸುದ್ದಿ ಏನೆಂದರೆ,ಪ್ರಾರಂಭಿಸಲು ಇದು ಎಂದಿಗೂ ತಡವಾಗಿಲ್ಲ.ನೀವು ನಿಧಾನವಾಗಿ
ಪ್ರಾರಂಭಿಸಬಹುದು ಮತ್ತು ನಿಮ್ಮ ಜೀವನದಲ್ಲಿ ಹೆಚ್ಚು ದೈಹಿಕ ಚಟುವಟಿಕೆಯನ್ನು ಹೊಂದಿಸಲು ಮಾರ್ಗಗಳನ್ನು
ಕಂಡುಕೊಳ್ಳಬಹುದು.ಹೆಚ್ಚಿನ ಪ್ರಯೋಜನವನ್ನು ಪಡೆಯಲು,ನಿಮ್ಮ ವಯಸ್ಸಿಗೆ ಶಿಫಾರಸು ಮಾಡಲಾದ ವ್ಯಾಯಾಮವನ್ನು
ಪಡೆಯಲು ನೀವು ಪ್ರಯತ್ನಿಸಬೇಕು.ನೀವು ಅದನ್ನು ಮಾಡಲು ಸಾಧ್ಯವಾದರೆ,ಪ್ರತಿಫಲವು ನಿಮಗೆ ಉತ್ತಮವಾಗಿರುತ್ತದೆ.
ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಬಹುಶಃ ಹೆಚ್ಚು ಕಾಲ
ಬದುಕಬಹುದು.
KARNATAKA “HOT” POLITICAL CRISIS:ತಮಿಳುನಾಡಿನ ಮೇಲೆ ಸಿದ್ದು ಗರಂ-ಗರಂ:
ಆರೋಗ್ಯ-ಓತ್ತಡಗಳು:
ಕೆಲವು ಸಮೀಕ್ಷೆಗಳ ಪ್ರಕಾರ ನಾವು ತೆಗೆದುಕೊಳ್ಳುವ ಓತ್ತಡದಿಂದ ನಮ್ಮ ಆರೋಗ್ಯ ಶೇಕಡ ೬೦% ರಷ್ಟು ಪರಿಣಾಮ
ಬೀರುತ್ತದೆ.ಇದರಿಂದ ಆತಂಕ,ಖಿನ್ನತೆ,ಜೀರ್ಣಕಾರಿ ಸಮಸ್ಯೆಗಳು,ತಲೆನೋವು,ಸ್ನಾಯು ಸೆಳೆತ ಮತ್ತು ನೋವು,
ಹೃದಯಾಘಾತ,ಅಧಿಕ ರಕ್ತದೊತ್ತಡ,ಪಾರ್ಶ್ವವಾಯು,ನಿದ್ರೆಯ ಸಮಸ್ಯೆಗಳು,ತೂಕ ಹೆಚ್ಚಾಗುವುದು ಸೇರಿದಂತೆ ವಿವಿಧ
ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಬರು ಸಾದ್ಯತೆಗಳು ಜಾಸ್ತಿ.ಆದರೆ ಇದು ನಿಮ್ಮನ್ನು ಹೆಚ್ಚಿನ ಅಪಾಯಕ್ಕೆ
ಒಳಪಡಿಸಬಹುದು.ಏಕಾಗ್ರತೆ ದುರ್ಬಲತೆ ಮತ್ತು ಮೆಮೋರಿ ಸಂಭಂದಿತ ಖಾಯಿಲೆ,ಇಂತಹವುಗಳನ್ನು ನೀವು ನಿಮ್ಮ ಓತ್ತಡದ
ಕಾರಣದಿಂದ ಆಹ್ವಾನಿಸುತ್ತಿದ್ದಿರಾ ಎನ್ನುವುದನ್ನು ನೆನಪಿನಲ್ಲಿಡಿ.ಆರೋಗ್ಯವಾಗಿರುವುದು ಉತ್ತಮ ದೈಹಿಕ ಆರೋಗ್ಯ
ಮತ್ತು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗಿರುವುದು.
ಆರೋಗ್ಯವಂತ ವ್ಯಕ್ತಿಯು ಹೆಚ್ಚು ಗಮನಹರಿಸಬಹುದು ಮತ್ತು ಹೆಚ್ಚು ನಿರ್ಧರಿಸಬಹುದು ಮತ್ತು ಸಂತೋಷದ ಜೀವನವನ್ನು
ನಡೆಸಬಹುದು. ನಾವು ಮಾನವ ಇತಿಹಾಸವನ್ನು ನೋಡಿದರೆ,ಮಾನವನ ದೊಡ್ಡ ಆಸ್ತಿ ಉತ್ತಮ ಆರೋಗ್ಯ ಮತ್ತು
ಆರೋಗ್ಯಕರ ಮನಸ್ಸು.
ಆದರಿಂದ ನಮ್ಮಗೆ ಸಾಧ್ಯವಾದಷ್ಟು ಓತ್ತಡಕ್ಕೆ ಒಳಗಾಗದಂತೆ ಜಾಗರೂಕರಾಗಿರಬೇಕು.ಒಳ್ಳೆಯ ಆಹಾರ ಮತ್ತು ವ್ಯಾಯಮ, ಓತ್ತಡ ರಹಿತ ಜೀವನ ಶೈಲಿಯನ್ನು ಅಳವಡಿಸಿಳ್ಳೊಣ. Mark Antony : ಸಿಲ್ಕ್ ಸ್ಮಿತ ಅವರನ್ನು ರಿಕ್ರಿಯೆಟ್ ಮಾಡಿದ ಕಾಲಿವುಡ್ .. ಮೂಲ ಟ್ವಿಸ್ಟ್ ಇಲ್ಲಿದೆ..
👏 🫂
Pingback: Smartphone Addiction in Kids: How to Break Your Kids Smartphone Addiction..? - ನಮ್ಮ ನ್ಯೂಸ್