3 Cops Suspended in Gangavathi: ಕರ್ನಾಟದಲ್ಲಿ ಗಣೇಶ ಮೂರ್ತಿ ನಿಮರ್ಜನೆಯ ಮೆರವಣಿಗೆ ವೇಳೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರ ನಡುವೆ, ನಡೆದ ಜಗಳಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಹೆಡ್ ಕಾನ್ಸ್ಟೆಬಲ್ ಒಬ್ಬರನ್ನು ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂದಗೋಡಿ ಗುರುವಾರ ಅಮಾನತುಗೊಳಿಸಿದ್ದಾರೆ.
ಕರ್ತವ್ಯಲೋಪ ಆರೋಪದ ಮೇಲೆ ಗಂಗಾವತಿ ನಗರ ಠಾಣೆ ಇನ್ಸ್ಪೆಕ್ಟರ್ “ಅಡಿವೆಪ್ಪ ಗುಡಿಗೊಪ್ಪ, ಸಬ್ ಇನ್ಸ್ಪೆಕ್ಟರ್ ಕಾಮಣ್ಣ ಮತ್ತು ಹೆಡ್ ಕಾನ್ಸ್ಟೆಬಲ್ ಮರಿಯಪ್ಪ” ಅವರನ್ನು ಅಮಾನತು ಮಾಡಲಾಗಿದೆ.
ಅಕ್ಟೋಬರ್ 3 ರಂದು ನಡೆದ ಮೆರವಣಿಗೆ ವೇಳೆ ಗಾಂಧಿ ವೃತ್ತದ ಮಸೀದಿ ಎದುರು ಕೆಲವರು ಕುಂಬಳಕಾಯಿ ಒಡೆದು ಬೆಂಕಿ ಹಚ್ಚಿ ಪೂಜೆ ಸಲ್ಲಿಸಿದ್ದರು.
ಪೊಲೀಸರು ಬೆಂಕಿ ನಂದಿಸಿ ಮೆರವಣಿಗೆ ಸಾಗುವಂತೆ ನೋಡಿಕೊಂಡರು.
ಕಳೆದ ವಾರ ನಡೆದ ಮತ್ತೊಂದು ಘಟನೆಯಲ್ಲಿ, ಹಿಂದೂ ಮಹಾಮಂಡಳಿಯ ಸದಸ್ಯರು ಗಣೇಶ ಮೂರ್ತಿಯ ನಿಮರ್ಜನೆಕ್ಕಾಗಿ ಇದೇ ರೀತಿಯ ಮೆರವಣಿಗೆಯಲ್ಲಿ ಮಸೀದಿಯ ಪ್ರವೇಶದ್ವಾರದ ಮುಂದೆ ‘ಮಂಗಳಾರತಿ’ ಮಾಡಿದರು. ಮಸೀದಿಯು ಒಂದು ಕಾಲದಲ್ಲಿ ಗಂಗಾಧರೇಶ್ವರ ದೇವಸ್ಥಾನವಾಗಿತ್ತು ಎಂದು ಅವರು ಹೇಳಿಕೊಂಡರು.